Posts

Showing posts with the label ಸಮತಳ

My village name is Samathala

ನಾ ಹುಟ್ಟುದ ಊರಿನ ಹೆಸರು ಸಮತಳ, ಸೌತ್ಲ ಅಲ್ಲ.ಸರಸ್ವತಿಪುರವೆಂಬ ಹೆಸರು ಇದ್ದದ್ದು ತಿಳಿದು ಬರುತ್ತದೆ. ಸಮತಳ ನಾನು ಹುಟ್ಟಿದ ಊರು. ಇದು ಭಾರತ ದೇಶದ ಕರ್ನಾಟಕ ರಾಜ್ಯದ ಮಲೆನಾಡಿನ ಕಾಫಿ ಜಿಲ್ಲೆ ಎಂದು ಪ್ರಸಿದ್ಧವಾದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ  ಐತಿಹಾಸಿಕ ಅಮೃತೇಶ್ವರ ದೇವಾಲಯವಿರುವ  ಅಮೃತಾಪುರ ಹೋಬಳಿಯಲ್ಲಿದೆ. ಇದು ಒಂದು ಪುಟ್ಟ ಗ್ರಾಮ.   ಈ ಗ್ರಾಮದಲ್ಲಿ ವೀರಶೈವರು, ಬಳೆಗಾರ ಶೆಟ್ಟರು, ಲಿಂಗಾಯತರು, ಮುಸಲ್ಮಾನರು ಇದ್ದಾರೆ. 1990 ರ ಚಂಡಮಾರುತದಿಂದ ಅತಂತ್ರಕ್ಕೊಳಗಾದ ತಮಿಳರು ಈ ಗ್ರಾಮದಲ್ಲಿ ನೆಲೆನಿಂತು ಕನ್ನಡ ಕಲಿತು ಗ್ರಾಮಸ್ಥರಾಗಿದ್ದಾರೆ ಮತ್ತು ತಮ್ಮ ನೆಲೆ ಕಂಡುಕೊಂಡಿದ್ದಾರೆ.   ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ತಿಮ್ಮಪ್ಪನ ದೇವಸ್ಥಾನ, ಶ್ರೀ ಪತ್ರೆ ಮರದ ಸಿದ್ದೇಶ್ವರ ಗುಡಿಯಿದೆ. ಆಲದಮರದಮ್ಮ, ಬೇವಿನ ಮರದಮ್ಮ, ಸಂತೆ ದಿಬ್ಬದ ಅಮ್ಮ ನೆಲೆಸಿದ್ದಾರೆ.   ಪ್ರತಿ ವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ, ಇಲ್ಲಿ ನಡೆಯುವ ಜಾತ್ರೆಯು ವಿಶೇಷವಾಗಿದೆ. ಜಾತ್ರೆಗೆ ಮೊದಲು ದೇವರ ವಿಗ್ರಹಗಳನ್ನು ಕಲ್ಲತ್ತಿಗಿರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ನೀರಿನಲ್ಲಿ ವಿಗ್ರಹಗಳನ್ನು ತೊಳೆಯಲಾಗುತ್ತದೆ. ನಂತರ ಆಯ್ದ ಕೆಲವರು ಮಾತ್ರ ವಿಗ್ರಹಗಳೊಂದಿಗೆ ಮೇಗಲ ಗಿರಿಗೆ ತೆರಳುತ್ತಾರೆ. ಮೇಗಲ ಗಿರಿಯ ದಾರಿಯು ದುರ್ಗಮವಾದುದಾಗಿದೆ. ಮೇಗಲಗಿರಿಯಲ್ಲಿ ನೆಲೆಸಿರುವ ಶ್ರೀ ವೀರಭದ್ರೇಶ್ವರ ದೇವರಿಗೆ