Posts

Showing posts from December, 2019

Pejavara Vishweshwara Theertharu

ಪೇಜಾವರಶ್ರೀಗಳು ಈದಿನ ಕೃಷ್ಣನಲ್ಲಿ ಐಕ್ಯರಾದರು ಇದು ಬಹಳ ಇದು ಕರವಾದ ವಿಷಯ ದುಃಖಕರವಾದ ವಿಷಯ ಪೇಜಾವರಶ್ರೀಗಳು ಯತಿವರೇಣ್ಯರು ಪೇಜಾವರಶ್ರೀಗಳು ಈದಿನ ಕೃಷ್ಣನಲ್ಲಿ ಐಕ್ಯರಾದರು ಇದು ಬಹಳ ಇದು ಕರವಾದ ವಿಷಯ ದುಃಖಕರವಾದ ವಿಷಯ ಪೇಜಾವರಶ್ರೀಗಳು ಯತಿವರೇಣ್ಯರು ಇವರು ನೀತಿಗಳಿಗೆ ಎತ್ತಿಗೆ ಇವರು ಹಿಂದೂ ಧರ್ಮದ ಕಟ್ಟ ಅನುಯಾಯಿಗಳಾಗಿದ್ದರು ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಿ ಮುನ್ನಡೆಸುವ ಶಕ್ತಿಯನ್ನು ಹೊಂದಿದ್ದರು ಪ್ರತಿಬಾರಿಯ ತಮ್ಮ ಶಕ್ತ್ಯಾನುಸಾರ ಹಲವರಿಗೆ ಹಲವು ರೀತಿಯ ಸಹಕಾರವನ್ನು ನೀಡಿದ್ದರು ರಾಮಮಂದಿರದ ನಿರ್ಮಾಣವನ್ನು ಗಮನಿಸಬೇಕಾದದ್ದು ಇವರ ಕರ್ತವ್ಯವಾಗಿದ್ದು ಆದರೆ ಕೃಷ್ಣನ ತೀರ್ಮಾನವನ್ನು ಅಲ್ಲಗಳೆಯುವವರು ಯಾರು ರಾಮಮಂದಿರ ರಾಮಮಂದಿರದ ಭಾರಿ ಹೋಗಿ ಪರವಾಗಿ ತೀರ್ಪು ಬಂದಿದೆ ಕೋರ್ಟ್ ರಾಮಮಂದಿರದ ಪರವಾಗಿ ತೀರ್ಪು ನೀಡಿದ ನಂತರ ಇವರ ಸಾವು ಸಂಭವಿಸಿದ್ದು ಇವರ ಸಾಧನೆ ಇಚ್ಚಾಶಕ್ತಿ ಇರಬಹುದು ಇವರು ಒಂದು ಸಂದರ್ಶನದಲ್ಲಿ ಭಾರತದ ಹಿಂದೂ ಧರ್ಮ ಸನಾತನ ಧರ್ಮ ಇದನ್ನು ನಾಶಪಡಿಸುವುದು ಯಾರಿಂದಲೂ ಸಾಧ್ಯವಿಲ್ಲ ದೇಶದಲ್ಲಿ ಈದಿನ ಬ್ರಾಹ್ಮಣ್ಯವನ್ನು ವಿರೋಧಿಸುವ ಜನರು ಸಹ ಕವಿತೆ ಭೋಜನ ಸಹಪಂಕ್ತಿ ಭೋಜನ ಸಮಾಜದಿಂದ ಬಹಿಷ್ಕರಿಸಿದ ಜನರಿಗೆ ಗೌರವಾದರಗಳನ್ನು ನೀಡಿದಾಗ ಕೋಮುವಾದಿ ಎಂದು ತಿರಸ್ಕರಿಸಿದ್ದ ನ್ನು ಅಲ್ಲಗಳೆದು ಜನಮಾನಸದಲ್ಲಿ ಸಮಾಜದಲ್ಲಿ ಇರುವ ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಬದಲಾಗಿ ಜಾತಿವ್ಯವಸ್ಥೆಯ ಸಂಕೀರ್ಣತೆ

Swamy Ayyappa ಶಬರಿಗಿರಿವಾಸನ ಪ್ರಯಾಣ 2019-20

          ಕೇರಳ ರಾಜ್ಯ ಪ್ರಕೃತಿ ಸೊಬಗಿನ ಅನನ್ಯ ರತ್ನ. ಎತ್ತ ನೋಡಿದರತ್ತ ಹಸಿರಿನಿಂದ ಕಂಗೊಳಿಸುತ್ತ. ತೆಂಗು, ರಬ್ಬರ್, ಟೀ ಗೆ ಹೆಸರುವಾಸಿಯಾದ ರಾಜ್ಯ. ಪ್ರತಿ ಬಾರಿ ಶಬರಿ ಮಲೆಗೆ ಬೇಟಿ ನೀಡಿದಾಗ ಗಮನಿಸುವುದು ಪ್ರಕೃತಿಗೆ ಮಾನವ ಕೊಡುಗೆ ಪ್ರಕೃತಿಯ ನಾಶ. ಹಸಿರು ಕಾಡಿನ ನಡುವೆ ಕಾಂಕ್ರಿಟ್ ಲೋಕ. ಕೇರಳಿಗರು ವೃತ್ತಿಪರ ವ್ಯಾಪಾರಸ್ಥರು. ಏರುಮಲೆಯಲ್ಲಿ ಒಂದು ರೂಪಾಯಿಯ ಶಾಂಪುವಿಗೆ 5 ರೂಪಾಯಿ ಪಡೆಯುವ ವ್ಯಾಪಾರಸ್ತ ಮನೋಭಾವದವರು. ಮಲೆಯಾಳಂ ಭಾಷೆ ಒರತು ಪಡಿಸಿ ಬೇರೆ ಭಾಷೆ ಬಳಸಲು ಆಸಕ್ತಿ ತೋರಿಸದ ವ್ಯಾಪಾರಸ್ತ ಮನೋಭಾವದವರು. ತಟ್ಟೆಯಲ್ಲಿ ಕೈ ತೊಳೆಯುವಂತಿಲ್ಲ.                       ಶಬರಿ ಮಲೆ ಯಾತ್ರೆ ಪ್ರತಿ ವರ್ಷವು ಒಂದು ಹೊಸತನವನ್ನು ನೀಡುತ್ತದೆ. ಪ್ರತಿ ಬಾರಿಯು ಹೊಸತನವನ್ನು ನೀಡುತ್ತದೆ. ಈ ಬಾರಿ ನಮ್ಮ ಪ್ರಯಾಣ ಜಯನಗರ ಟಿ.ಬ್ಲಾಕ್ ನ ಶ್ರೀ. ಕರುಮಾರಿಯಮ್ಮ ದೇವಸ್ಥಾನದಿಂದ ಶುರುವಾಯಿತು. ರಾಹುಕಾಲವನ್ನು ಮುಗಿಸಿಕೊಂಡು ನಮ್ಮ ವಾಹನ ಮುನ್ನಡೆಯಿತು. ವಾಹನ ಚಾಲಕ ಕುಂಕನಾಡಿನವನಾಗಿದ್ದ, ಸಂಬಂಧಿಯಾಗಿದ್ದ. ಅಲ್ಲಿಂದ ಮೈಸೂರಿಗೆ ಪ್ರಯಾಣ ಅಲ್ಲಿ ಸ್ವಲ್ಪ ಒತ್ತು ಕಾಯಲಾಯಿತು ಬೀರೂರು ಹಾಗೂ ಚಿಕ್ಕಾನವಂಗಲದಿಂದ ಬಂದ ಸಂಬಂಧಿಕರನ್ನು ಕರೆದುಕೊಂಡು ಮುನ್ನಡೆಯಲಾಯಿತು. ನಂಜನಗೂಡಿನಲ್ಲಿ ನಂಜುಂಡೇಶ್ವರನ ದರ್ಶನಕ್ಕಾಗಿ ಬೇಟಿ ನೀಡಿದೆವು. ಹೊಳೆಯ ದಡದಲ್ಲಿ ಕಾಮಗಾರಿ ಚಾಲ್ತಿಯಲ್ಲಿದ್ದಿತು. ಕೈ ಕಾಲು ತೊಳೆದುಕೊಂಡು ಶ್ರೀ ನಂಜುಂಡೇಶ್ವ

ನಾನು ಬೇಟಿ ನೀಡಿದ ಒಂದು ಸರಕಾರಿ ಶಾಲೆ.

                 ಇತ್ತೀಚೆಗೆ ಕಾರ್ಯಕ್ರಮ ನಿಮಿತ್ಯ ಒಂದು ಸರ್ಕಾರಿ ಶಾಲೆಗೆ ಬೇಟಿ ನೀಡಿದೆ.  ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಕಲಿತ ಹಳ್ಳಿ ಹುಡುಗ.  ಸರ್ಕಾರಿ ಶಾಲೆಗಳಿಗೆ ಪ್ರತಿಬಾವಂತ ಶಿಕ್ಷಕರು ಆಯ್ಕೆಯಾಗಿರುತ್ತಾರೆ. ಈ ಶಾಲೆಯಲ್ಲಿ ಗಮನಿಸಿದ ವಿಷಯಗಳು  ಮಕ್ಕಳು ನೆಲದ ಮೇಲೆ ಕುಳಿತಿದ್ದರು. ಸ್ವ ನೈರ್ಮಲ್ಯಕ್ಕೆ ಆದ್ಯತೆ ಇರಲಿಲ್ಲ. ಅಥವಾ ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ಶಿಕ್ಷಕರು ಬಿಟ್ಟಿರಬೇಕು. ಬರಿಗಾಲಿನಲ್ಲಿ ಬಂದಿದ್ದ ವಿದ್ಯಾರ್ಥಿಗಳು.                   ನಾನು ಶಾಲೆಗೆ ಹೋಗುವಾಗ ಕೂರಲು ಮರದ ಮಣೆಗಳಿದ್ದವು. ಆದರೆ ಇವತ್ತು ಅದು ಕೂಡ ಇಲ್ಲದೆ ನೆಲದ ಮೇಲೆ ಕುಳಿತಿದ್ದು ಭ್ರಷ್ಟಚಾರ ತಾಂಡವವಾಡುತ್ತಿರುವುದಕ್ಕೆ ಒಂದು ಉದಾಹರಣೆಯಾಗಿದೆ. ಶಿಕ್ಷಕರು ತಾವು ಟಾಕು ಟೀಕಾಗಿ ಶಾಲೆಗೆ ಬರುವುದರ ಜೊತೆಗೆ ತಮ್ಮ ಶಾಲೆಯ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗಿಂತ ನೈರ್ಮಲ್ಯ, ಶುಚಿತ್ವದಲ್ಲಿ, ಶಿಕ್ಷಣದಲ್ಲಿ ರಾಜಿ ಇಲ್ಲದೆ ಇರಬೇಕು ಎಂದು ಬಾವಿಸಬೇಕಾದ ಅವಶ್ಯಕತೆ ಇದೆ.                ಯಾವ ಸರಕಾರಿ ಶಿಕ್ಷಕ/ಶಿಕ್ಷಕಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ ಅಂತಹವರು ತಾವು ಮಾಡುವ ಶಿಕ್ಷಣದ ಕುರಿತು ಯೋಚಿಸಬೇಕಾದ ಸಂದಿಗ್ದತೆ ಇದೆ.  ಈ ರೀತಿಯ ಪರಿಸರವನ್ನು ಗಮನಿಸಿದಾಗ ಸರಕಾರಿ ಶಾಲೆಗೆ ಕಳುಹಿಸಿಕೊಡಬೇಕೆಂದು ಯೋಚಿಸುವ ನನ್ನಂತವರು ಎರಡು ಬಾರಿ ಯೋಚಿಸುವಂತಾಗುತ್ತದೆ.               ಶಿಕ್ಷಣ, ಶು