Posts

Showing posts with the label Hirekerur

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Image
ಓಂ ಶ್ರೀ ಗುರು ಚನ್ನ ಬಸವವೇಶ್ವರ ಸ್ವಾಮಿ, ಶ್ರೀ ಗುರು ಬಸವೇಶ್ವರ ಸ್ವಾಮಿ, ಓಂ ಶ್ರೀ ಪತ್ರೆಕಲ್ಲು ಸಿದ್ದೇಶ್ವರ ಸ್ವಾಮಿ, ಶ್ರೀ ಮುದ್ರೆಕಲ್ಲೇಶ್ವರ ಸ್ವಾಮಿ , ಶ್ರೀ ಗುರು ಮೂಕಪ್ಪ ಶಿವಯೋಗಿ ಪ್ರಸೀದಃ ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ,  ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ    ಕಿರು ಪರಿಚಯ                                 “ಹಲವು ಮಾತೇನು ನೀನೊಲಿದು ಪಾದವನಿಟ್ಟ                                    ನೆಲವೇ ಸುಕ್ಷೇತ್ರ/ಜಲವೇ ಪಾವನ ತೀರ್ಥ                                    ಸುಲಭ ಶ್ರೀಗುರುವೇ ಕೃಪೆಯಾಗು”        ಭಾರತ ಆಧ್ಯಾತ್ಮದ ತವರೂರು, ದಿವ್ಯ ಶಕ್ತಿಯ ಪುಣ್ಯಭೂಮಿ. ಅಂತಹ ದಿವ್ಯ ಪರಂಪರೆಯ ಸಾಲಿನಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕ ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿಗಳ ಮಠವು ಒಂದು. ಮಹಾಮಹಿಮರಾದ ಮೂಕಪ್ಪ ಶಿವಯೋಗಿಗಳು ಪರಮ ವೈರಾಗಿಗಳು, ಲಿಂಗಲೀಲಾ ವಿಲಾಸಿಗಳು, ಪವಾಡಪುರುಷರು, ವಿಶ್ವಕಲ್ಯಾಣಕ್ಕೆ ಅಂತಃಶಕ್ತಿಯನ್ನು, ತಪಃಶಕ್ತಿಯನ್ನು ಅನುಗ್ರಹಗೈದವರು, ಮೌನದಿಂದಲೇ ಮಹದೇವನನ್ನು ಕಂಡವರು, ಮೌನಿಯಾಗಿ ತಪಗೈದು ಶಿವಯೋಗಿ ಸಿದ್ಧನೆನಿಸಿದವರು ಶ್ರೀ ಗುರು ಮೂಕಪ್ಪ ಶಿವಯೋಗಿಗಳು.         ಇಂತಹ ಮಹಿಮರ ಶ್ರೀಮಠಕ್ಕೆ ಪೀಠಾಧಿಪತಿಗಳಾದವರು ಕಾಯಕ ಜೀವಿಗಳು, ಕ್ರೀಯಾಶೀಲ ವ್ಯಕ್ತಿತ್ವವುಳ್ಳ ಶ್ರ