Posts

Never Forget Your Past. It's Your Best Teacher.

Image
BILL GATES in a restaurant. After eating, he gave 5$ to the waiter as a tip. The waiter had a strange feeling on his face after the tip. Gates realized & asked. What happened? Waiter: I'm just amazed Bcoz on the same table ur son gave Tip Of... 500$... & u his Father, richest man in the world Only Gave 5$...? Gates Smiled & Replied With Meaningful words: "He is Son of the world's richest man, but i am the son of a wood cutter..." ( Never Forget Your Past. It's Your Best Teacher. )  Make Sure To Visit Our New Website : ●►  www.AwesomeQuotes4U.com

Hapazard articles

Image

ದೇವರ ಆಟ ಬಲ್ಲವರ್ಯಾರು...

ನಾವು ಬಯಸಿದ್ದು ನಮಗೆ ಸಿಗದಾಗ ನಾವು ದೇವರ ಮೇಲೆ ಕೋಪ ಮಾಡಿಕೊಳ್ಳುತ್ತೇವೆ, ನಮ್ಮ ಸ್ನೇಹಿತರನ್ನು, ಬಳಗದವರನ್ನು ದ್ವೇಷಿಸುವಂತೆ ದ್ವೇಷಿಸುತ್ತೇವೆ, ದೇವರ ಮೇಲೆ ಕೂಗಾಡುತ್ತೇವೆ. ದೇವರು ಹೆಸರಿಗೆ ತಕ್ಕ ಹಾಗೆ ಸ್ನೇಹ ಮಾಯಿ, ಮಾತಾ ಹೃದಯಿ, ಮಕ್ಕಳಿಗೆ ಏನು ಬೇಕು ಎಂಬುದು ಅವನಿಗೆ ತಿಳಿದಿದೆ. ಮಕ್ಕಳಿಗೆ ಬೇಕಾದುದನ್ನು ಸಮಯಕ್ಕೆ ಸರಿಯಾಗಿ ಸಿಗುವಂತೆ ನೋಡಿಕೊಳ್ಳುತ್ತಾನೆ. ದೇವರ ಆಟ ಬಲ್ಲವರ್ಯಾರು ಆತನ ಎದಿರು ನಿಲ್ಲುವರ್ಯಾರು..                          ಎಂಬಂತೆ ನಮ್ಮನ್ನು ಸದಾ ಕಾಲ ರಕ್ಷಿಸಿ ಕಾಪಾಡುತ್ತಿರುವ ದೇವರಿಗೆ ನನ್ನ ನಮನಗಳು, ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.

ಸಹಾರ one ಸುರ್ ಕ್ಷೇತ್ರ ಸಂಗೀತ ಕಾರ್ಯಕ್ರಮದಲ್ಲಿ

ಸಹಾರ one ಸುರ್ ಕ್ಷೇತ್ರ ಸಂಗೀತ ಕಾರ್ಯಕ್ರಮ- ಪಾಕಿಸ್ತಾನ ಮತ್ತು ಭಾರತದ ಹಾಡುಗಾರರ ನಡುವಿನ ಸ್ಪರ್ಧೆ. ಮಾತೃ ಪ್ರಧಾನ ಹಾಡುಗಳು ಈ ದಿನದ ಕಾರ್ಯಕ್ರಮದ ವಿಶೇಷವಾಗಿದ್ದಿತು. ಪ್ರತಿಯೊಬ್ಬ ಸ್ಪರ್ಧಿಯು ಮನಮೋಹಕವಾಗಿ ಹಾಡಿ, ತಾಯಿಗೆ ಸೀಮೆಯ ಅಂತರವಿಲ್ಲ. ಬಡತನ, ಸಿರಿತನದ ಪರಿಧಿಗೆ ಸಿಳುಕಿದವಳಲ್ಲ ಎಂದು ಸಾರಿದರು. ಪ್ರತಿಯೊಂದು ಹಾಡು ಹಾಡುಗಾರರ, ತೀರ್ಪುಗಾರರ, ನಿರೂಪಕಿಯ ಕಣ್ಣಿನಲ್ಲಿ ಮಮತೆಯ ಕಣ್ಣೀರಿಗೆ ಸಾಕ್ಷಿಯಾಯಿತು. ಜೀವನದಲ್ಲಿ ನಮ್ಮ ಜೊತೆ ಯಾರು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಾಯಿಯ ಆಶೀರ್ವಾದ, ಅವಳ ನಿಸ್ವಾರ್ಥ ಪ್ರೀತಿ ಮಮತೆ ನಮ್ಮನ್ನು ಸದಾ ಕಾಪಾಡುತ್ತದೆ ಹಾಗು ಕತ್ತಲೆಯಲ್ಲಿ ಮುನ್ನಡೆಸುತ್ತದೆ. ನಮ್ಮಲ್ಲಿ ನಂಬಿಕೆಯನ್ನು ಕಳೆದುಕೊಂಡಾಗ, ಸುತ್ತಲ ಸಮಾಜವು ನಮ್ಮನ್ನು ಕಡೆಗಣಿಸಿದಾಗ ನಮ್ಮಲ್ಲಿ ನಂಕೆಯಿಡುವವಳು ಅಮ್ಮ ಮಾತ್ರ. ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಿ ಮುನ್ನಡೆಸುತ್ತಾಳೆ. ಅಮ್ಮ ಜಗತ್ತಿನ ದೊಡ್ಡ ನಿಧಿ. ಈ ಕಾರ್ಯಕ್ರಮವನ್ನು ಪ್ರಕಟಿಸಿದ ಸಹಾರ one ಗೆ ನನ್ನ ನಮನಗಳು.

ಕಾಯಕ ಯೋಗಿ ನುಲಿಯ ಚಂದಯ್ಯನವರ ಸುಕ್ಷೇತ್ರ ನಂದಿ.

Image
ಕಾಯಕ ಯೋಗಿ ನುಲಿಯ ಚಂದಯ್ಯನವರ ಸುಕ್ಷೇತ್ರ ನಂದಿ. ವಚನಗಳ ಕಾಲಕ್ಕೆ ನಮ್ಮನ್ನು ಸೆಳೆದೊಯ್ಯುವ ಕಾಯಕ ಕ್ಷೇತ್ರ. ನುಲಿಯ ಚಂದಯ್ಯನವರ ದಾಸೋಹ ಹಾಗು ಸಿದ್ದೇಶ್ವರ ಸ್ವಾಮಿಯ ರುದ್ರಾಭಿಷೇಕ ಮತ್ತು ದುಗ್ಗಳದ  ಸೇವೆ ಇಲ್ಲಿಯ ವಿಶೇಷ. ಇಲ್ಲಿ ಮೊದಲಿಗೆ ದುಗ್ಗಳಮಾರುವವರು ಬರಿ ಜಂಗಮರಾಗಿದ್ದರು, ಆದರೆ ಇಂದು ಎಲ್ಲ ವರ್ಗದ ಜನ ಮಾರುತ್ತಾರೆ. ದುಗ್ಗಳದ ಕಟ್ಟಿನಲ್ಲಿ ಸಾಂಬ್ರಾಣಿ, ಕರ್ಪೂರ ಮತ್ತು ಒಣ ಕೊಬ್ಬರಿಯಿರುತ್ತದೆ. ಊದುಬತ್ತಿ, ಬಾಳೆ ಹಣ್ಣು, ಕಾಯಿಯನ್ನು ಪ್ರತ್ಯೇಕವಾಗಿ ಕೊಳ್ಳಬೇಕು. ಊಟ ತಯಾರಿಸುವವರು ಗಂಡಸರು. ಹೆಣ್ಣು ಮಕ್ಕಳಿಗೆ ಅ ಡುಗೆ ಮನೆಗೆ ಪ್ರವೇಶವಿಲ್ಲ. ಮಾಂಸ ಮದ್ಯ ಸೇವನೆ ನಿಷೇದಿಸಿದೆ. ಇಲ್ಲಿಗೆ ಬರುವವರು ಕೂಡ ಆ ದಿನದ ಮಟ್ಟಿಗೆ ಮಾಂಸ ಮದ್ಯ ಸೇವನೆಯನ್ನು ವರ್ಜಿಸುವುದು ಉತ್ತಮ. ಏಕೆಂದರೆ ಇದು ಪೂಜನೀಯ ಸ್ಥಳವಾಗಿದೆ. ಇದು ತರೀಕೆರೆ ತಾಲ್ಲೂಕ್, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ ರಾಜ್ಯದಲ್ಲಿದೆ. ಇಲ್ಲಿಗೆ ನೆರೆಯ ಪಟ್ಟಣವಾದ ತರೀಕೆರೆಯಿಂದ ವಾಹನ ಸೌಕರ್ಯವಿದೆ.

ಯಶ್ ರಾಜ್

Image
ಹಲವರ ದೇಹ ನಮ್ಮಿಂದ ಮರೆಯಾದರು ಅವರು ಬಿಟ್ಟು ಹೋದಂತಹ ದಾಖಲೆಗಳು ಅವರನ್ನು ಚಿರಸ್ಥಾಯಿಗೊಳಿಸುತ್ತವೆ. ಅಂತಹ ವ್ಯಕ್ತಿಗಳ ನಡುವೆ ಮತ್ತೆ ಮತ್ತೆ ನಮ್ಮ ಮನಸ್ಸನ್ನು ಕಾಡುವವರು, ಯಶ್ ರಾಜ್ ಚೋಪ್ರಾ. "ಜಬ್ ತಕ್ ಹೈ ಜಾನ್" ಇವರು ನಿರ್ದೇಶಿಸಿದ ಕೊನೆಯ ಚಿತ್ರ.

ಶ್ರೀ 420 - ರಾಜ್ ಕಪೂರ್

ಶ್ರೀ 420 . 1955 ರಲ್ಲಿ ಬಾಲಿಹುಡ್ ನ ಮಹಾನ್ ನಟ ರಾಜ್ ಕಪೂರ್ ನಟಿಸಿ, ನಿರ್ದೇಶಿಸಿ,ನಿರ್ಮಿಸಿದ ಚಿತ್ರ. ಈ  ಚಿತ್ರದಲ್ಲಿಯ ಹಾಡು "ಜೂತಾ ಹೇ ಜಪಾನಿ .." ಇಂದಿಗೂ ಎಲ್ಲರ ಮನಸೆಳೆಯುವಂತ ಹಾಡಾಗಿದೆ.  ಇಂದಿಗೂ ಈ ಚಿತ್ರವು ಪ್ರಸ್ತುತವೆನಿಸಿದೆ.  ಅದರಲ್ಲಿಯ ಪ್ರತಿಯೊಂದು ಪಾತ್ರ, ಕಥೆಯನ್ನು ಹೇಳುತ್ತದೆ. ಮುಂಬಾಯಿಯಲ್ಲಿ ಹಣ ಮಾತಾಡುತ್ತದೆ. ಜನ ಸಿಮೆಂಟ್ ನಲ್ಲಿ ಮನೆ ಕಟ್ಟುತ್ತಾರೆ ಹಾಗು ಜನರ ಮನಸ್ಸು ಕಲ್ಲಿನದಾಗಿದೆ ಎಂದು ಹೇಳುವ ಬಿಕ್ಷುಕನ ಮಾತು ನಿಜ ಎನಿಸುತ್ತದೆ.  footpath ಮೇಲೆ ಮಲಗಲು ಕೂಡ ಹಣ ಕೊdaಬೇಕಾಗುತ್ತದೆಂಬುದು ಎಷ್ಟು ವಿಪರ್ಯಾಸ! 3ಹಣ್ಣಿಗೆ 2 ಆಣೆ ಎಂದರೆ ದುಡ್ಡಿಲ್ಲದ ನಾಯಕ 3 ಆನೆಗೆ 2 ಹಣ್ಣು ಎಂದು ಹೇಳಿ ತನ್ನ ಹಸಿವನ್ನು ನಿಗಿಸಿಕೊಳ್ಳುವ ದೃಶ್ಯ ಮನಸ್ಸಿಗೆ ನಾಟುತ್ತದೆ.  ಹಣ್ಣಿನ ವ್ಯಾಪಾರಿ ಮಹಾನಗರದಲ್ಲಿ ಇನ್ನು ಮಾನವತ್ವ ಮರೆಯಾಗಿಲ್ಲ ಎಂಬುದರ ಪ್ರತೀಕವಾಗಿದ್ದರೆ