ಕಾಯಕ ಯೋಗಿ ನುಲಿಯ ಚಂದಯ್ಯನವರ ಸುಕ್ಷೇತ್ರ ನಂದಿ.

ಕಾಯಕ ಯೋಗಿ ನುಲಿಯ ಚಂದಯ್ಯನವರ ಸುಕ್ಷೇತ್ರ ನಂದಿ.

ವಚನಗಳ ಕಾಲಕ್ಕೆ ನಮ್ಮನ್ನು ಸೆಳೆದೊಯ್ಯುವ ಕಾಯಕ ಕ್ಷೇತ್ರ. ನುಲಿಯ ಚಂದಯ್ಯನವರ ದಾಸೋಹ ಹಾಗು ಸಿದ್ದೇಶ್ವರ ಸ್ವಾಮಿಯ ರುದ್ರಾಭಿಷೇಕ ಮತ್ತು ದುಗ್ಗಳದ  ಸೇವೆ ಇಲ್ಲಿಯ ವಿಶೇಷ.

ಇಲ್ಲಿ ಮೊದಲಿಗೆ ದುಗ್ಗಳಮಾರುವವರು ಬರಿ ಜಂಗಮರಾಗಿದ್ದರು, ಆದರೆ ಇಂದು ಎಲ್ಲ ವರ್ಗದ ಜನ ಮಾರುತ್ತಾರೆ.

ದುಗ್ಗಳದ ಕಟ್ಟಿನಲ್ಲಿ ಸಾಂಬ್ರಾಣಿ, ಕರ್ಪೂರ ಮತ್ತು ಒಣ ಕೊಬ್ಬರಿಯಿರುತ್ತದೆ. ಊದುಬತ್ತಿ, ಬಾಳೆ ಹಣ್ಣು, ಕಾಯಿಯನ್ನು ಪ್ರತ್ಯೇಕವಾಗಿ ಕೊಳ್ಳಬೇಕು.

ಊಟ ತಯಾರಿಸುವವರು ಗಂಡಸರು. ಹೆಣ್ಣು ಮಕ್ಕಳಿಗೆ ಅ ಡುಗೆ ಮನೆಗೆ ಪ್ರವೇಶವಿಲ್ಲ.

ಮಾಂಸ ಮದ್ಯ ಸೇವನೆ ನಿಷೇದಿಸಿದೆ. ಇಲ್ಲಿಗೆ ಬರುವವರು ಕೂಡ ಆ ದಿನದ ಮಟ್ಟಿಗೆ ಮಾಂಸ ಮದ್ಯ ಸೇವನೆಯನ್ನು ವರ್ಜಿಸುವುದು ಉತ್ತಮ. ಏಕೆಂದರೆ ಇದು ಪೂಜನೀಯ ಸ್ಥಳವಾಗಿದೆ.
ಇದು ತರೀಕೆರೆ ತಾಲ್ಲೂಕ್, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ ರಾಜ್ಯದಲ್ಲಿದೆ.
ಇಲ್ಲಿಗೆ ನೆರೆಯ ಪಟ್ಟಣವಾದ ತರೀಕೆರೆಯಿಂದ ವಾಹನ ಸೌಕರ್ಯವಿದೆ.


Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva