ಒಂದು ದೂರವಾಣಿ ಕರೆ ನೂರು ವಿಚಾರಗಳು

        ಸಂಜೆ 7 ರ ಸಮಯ, ದೂರವಾಣಿ ಕರೆ ಬಂದಿತು ನಿಮ್ಮ ಮೇಲೆ ಯಾರೋ ಮೂಕರ್ಜಿಯನ್ನು ಬರೆದಿದ್ದಾರೆ. ನೀವು ಕಡತಕ್ಕೆ ಸಹಿ ಮಾಡಲು ಹಣವನ್ನು ಕೇಳುತ್ತೀರೆಂದು, ಹಾಗೂ ಕಛೇರಿಯಲ್ಲಿ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತೀರಿ ಎಂದು'. ನನ್ನ ಬಾಯಿಯಿಂದ ಮೊದಲ ಬಂದ ಉತ್ತರ ''I will commit suicide''. ಕರೆ ಮಾಡಿದವರು ಸಂತೈಸಿದರು, ಅಂತಹ Extreme  step  ತೆಗೆದುಕೊಳ್ಳುವುದು ಏನು ಆಗಿಲ್ಲ, ಇಲಾಖೆಯಲ್ಲಿ ವೇತನ ಹೊರತು ಪಡಿಸಿ ಯಾವುದೇ Procurement, Tender ಗೆ ಹಣದ ಹೊಂದಾಣಿಕೆಯಾಗಿದೆ ಸಹಿ ಮಾಡುವ ಅಧಿಕಾರಿಗಳು ಯಾರಿದ್ದಾರೆ, ಭ್ರಷ್ಟರ ಲೋಕದಲ್ಲಿ ಪ್ರಾಮಾಣಿಕತೆಯ ಬಟ್ಟೆ ತೊಡಲು ಹೊರಟ ಕಾರಣಕ್ಕೆ ಯಾರೋ ಈ ರೀತಿ ಮಾಡಿರಬೇಕು, ಎಚ್ಚರ ದಿಂದಿರಿ ಎಂದು ತಿಳಿಸಿದರು. ಹಣಕಾಸಿನ ವಿಚಾರದಲ್ಲಿ ಖಾಯಂ ನೌಕರರು/ಅಧಿಕಾರಿಗಳು ಗುತ್ತಿಗೆ ಸಿಬ್ಬಂದಿಗಳ ಮೂಲಕ ನೇರವಾಗಿ ಹಣ ಮಾಡುತ್ತಿರುವುದು ಸಾಮಾನ್ಯವಾಗಿದೆ. ನಿಮ್ಮಿಂದ ಯಾರಿಗೊ ಹಣದ ಒಳ ಹರಿವು ಕಡಿಮೆಯಾಗಿರುವುದಕ್ಕೆ ಈ ರೀತಿ ಮಾಡಿದ್ದಾರೆ ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬ ಬೇಡಿ ಎಂದು ಹೆಚ್ಚರಿಸಿದರು.

           ಈ ಕರೆ ಹಲವು ವಿಚಾರಗಳನ್ನು ಇಲ್ಲಿಯವರೆಗೆ ಜರುಗಿದ ವಿಚಾರಗಳ ಕುರಿತು ಮೆದುಳು ಬೇಡವೆಂದರು ಯೋಚಿಸಲು ತೊಡಗಿತು. ಬಂದಾಗ ಕಛೇರಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳು ಹರಿಹರ, ದಾವಣಗೆರೆ ಇಂದ ಬರುತ್ತಿದ್ದರು. 11.30 ಕ್ಕೆ ಬಂದು 3.00 ಕ್ಕೆ ಹೋಗುತ್ತಿದ್ದರು.  ಸಾಮಾನ್ಯವಾಗಿ ಒಬ್ಬ ವ್ಯಕ್ತ 2 ಗಂಟೆ ತಡವಾಗಿ ಬಂದರೆ  ವರ್ಷದಲ್ಲಿ 250 ಕೆಲಸದ ದಿನಗಳೆಂದು ತಿಳಿದರೆ 500 ಗಂಟೆಗಳಾದವು 10 ವರ್ಷಕ್ಕೆ 5000 ಗಂಟೆಗಳು  ಇವುಗಳನ್ನು 8 ಗಂಟೆಗಳ ಒಂದು ದಿನಕ್ಕೆ ಬದಲಿಸಿದರೆ 625 ದಿನಗಳು ಅಂದರೆ 1.71 ವರ್ಷಗಳು ಕೂರಿಸಿ ಪಗಾರ ನೀಡಲಾಗಿರುತ್ತದೆ.

        10 ವರ್ಷಗಳಲ್ಲಿ ಒಬ್ಬರು ಒಂದು ದಿನವು ರಜೆ ತೆಗೆದುಕೊಂಡ ನಿದರ್ಶನವಿಲ್ಲ.  ಈ 10 ವರ್ಷಗಳಲ್ಲಿ ಒಂದು ದಿನ ಉಷಾರಿಲ್ಲ, ಯಾವ ನೆಂಟರಿಸ್ಟರು ಮರಣಿಸಿಲ್ಲ, ಒಂದು ದಿನವು ಬೇರೆ ಯಾವುದೇ ಕಾರಣಕ್ಕು ರಜೆಯನ್ನು ತೆಗೆದುಕೊಂಡಿಲ್ಲ. ನಮಗೆ ಮಾತ್ರ ನಮ್ಮ ಮದುವೆಗು ಕೂಡ ವೇತನವನ್ನು ಕಡಿತಗೊಳಿಸಿದರು.

         ನಾವು ಮಾಡಬೇಕಾದ ಕೆಲಸವನ್ನು ಬೇರೆಯವರಿಗೆ ವಹಿಸಿ, Brain Washing  ನಲ್ಲಿ ತೊಡಗಿರುವ ಅಧಿಕಾರಿಗಳು, ಸಿಬ್ಬಂದಿಗಳು, ನಾವು ತೊಡುವ ಬಟ್ಟೆ, ಆರ್ಥಿಕ ಸ್ಥಿತಿ, ಜಾತಿ ಪ್ರತಿಯೊಂದರ ಬಗ್ಗೆಯು verbal abusing  ನಲ್ಲಿ ತೊಡಗಿ ತಾವೇ ವೇಧಾಂತಿಗಳೆಂದು ತಿಳಿಯಪಡಿಸುವವರು. ಯಾವುದೇ ಕಡತವಾದರು ಸರಿ ಆದರೆ ವೇತನವನ್ನು ಮಾತ್ರ ನಿಯಮಾನುಸಾರ ಮಾಡಬೇಕು. 
              
             ಬೇರೆಯವರು ಕೇಳುವ ವಸ್ತುಗಳು ದಿಡೀರ್ ಹಾಜರು ಆದರೆ ನಾವು ಕೇಳುವ ಚೇರ್ ಹಾಗೂ ಅಗತ್ಯ ವಸ್ತುಗಳಿಗೆ ಬೇರೋಬ್ಬರ ಮುಲಾಜು. ಕಡತಗಳೇ ಮಾಯ. ಅಧಿಕಾರವಿದ್ದರು ಬಳಸಿಕೊಳ್ಳಲಾಗದ ಅಸಮರ್ಥ ಮನೋಭಾವ,  ಏನೇ ತಂದರು ಸಹಿ ಹಾಕುವುದಕ್ಕೆ ಮಾತ್ರ ಸೀಮಿತ ಎನ್ನುವಂತೆ ನಮ್ಮ ಆಡಳಿತದಲ್ಲಿ Interfere ಆಗಿ puppet  ರೀತಿ ಆಗಿದ್ದು ವೈರುದ್ಯವೇ ಸರಿ.

           ಮೊದಲಿನಿಂದಲು 2 ಮಾತುಗಳನ್ನು, ಪಾಲಿಸಿದ ಜನರಿಗೆ ಹೊಸದಾಗಿ ನಾವು ಹೇಳಿದ್ದು ರುಚಿಸಲಿಲ್ಲ. ಬದಲಿಗೆ ನಮ್ಮನ್ನು ಮೂಲೆಗುಂಪು ಮಾಡಿದರು, ಸಭೆ ಸಮಾರಂಭಗಳಲ್ಲಿ ಮಾತನಾಡುವ ಅವಕಾಶವನ್ನು ದೂರ ಮಾಡಿದರು, ಸಭೆ ಸಮಾರಂಭಗಳಿಂದ, ಸಭೆಗಳಿಂದ ದೂರವಿಟ್ಟರು.ವ್ಯಕ್ತಿತ್ವ ನಾಶ ಮಾಡಲು ಪ್ರಯತ್ನಿಸಿದರು, ಈ ಅವಧಿಯಲ್ಲಿ ಹಲವು ಬಾರಿ ಕೆಲಸಕ್ಕೆ ತಿಲಾಂಜಲಿ ಕೊಡಲು ತೀರ್ಮಾನಿಸಿದ್ದು ಇದೇ.

            ಒಂದು ರೀತಿ ಏಕಾದರೂ ಈ ಕಛೇರಿಗೆ ಬರುತ್ತೀನೋ ಎನ್ನುವ ಮನಸ್ಥಿಗೆ ನಮ್ಮನ್ನು ನೂಕಿದರು. ಅವರ ಉದ್ದೇಶ ನಾವಾಗಿಯೇ ಕೆಲಸ ಬಿಟ್ಟು ಹೋಗಬೇಕು ಎನ್ನುವುದಿರಬೇಕು. 10 ವರ್ಷದಲ್ಲಿ 4 ಜನ ನನ್ನ ಹುದ್ದೆಯಲ್ಲಿ ಬದಲಾದವರು ಆದರೆ  ಉಳಿದವರ್ಯಾರು ಬದಲಾಗಲಿಲ್ಲ. ಅಧಿಕಾರಿಗಳು ತಮ್ಮ ಹುದ್ಧೆಯ ಹೆಸರನ್ನು ಬದಲಿಸಿದರೇ ಹೊರತು ಜಿಲ್ಲೆಗೆ ಹೊಸಬರು ಬರಲೇ ಇಲ್ಲ ಜೊತೆಗೆ ಹೊಸತು ಬರಲಿಲ್ಲ.

                  ಪ್ರತಿಬಾರಿಯು ಅಧಿಕಾರಿ ತಪ್ಪಿತಸ್ತರಿಗೆ ಬೆಂಬಲ ನೀಡಿದರು. ನಮಗೆ ಅವರುಗಳ ಮುಂದೆ ಅವಮಾನಿಸಿದರು. ನಾವು ಹಣಕಾಸು ವ್ಯವಹಾರದಲ್ಲಿ  ಸಹಕಾರ ನೀಡದಿರುವುದು ತಿಳಿದು Chain of Command  ಅನ್ನೆ ತುಂಡರಿಸಿ ಕೆಳಗಿನವರ ಮೂಲಕ ಕೆಲಸ ತೆಗೆದುಕೊಳ್ಳ ಹತ್ತಿದರು. ಪ್ರತಿಯೊಂದು ತಾನು, ತಾವು ಎಂದು ನಡೆದರು, ಹಣಕಾಸಿನ ವ್ಯವಹಾರದಲ್ಲಿ ಡೀಲಿಂಗ್ಸ್ ನಲ್ಲಿ ತೊಡಗಿದವರ್ಯಾರು ಕಡತಗಳಿಗೆ ಸಹಿ ಮಾಡುವವರಾಗಿರಲಿಲ್ಲ. 

                   ಒಮ್ಮೆ ಕಡತದಲ್ಲಿರುವ ಲೋಪದೋಷಗಳನ್ನು ಎತ್ತಿ ತೋರಿಸಿದ್ದಕ್ಕೆ, ದರ್ಪದಿಂದ ಒಬ್ಬ ಖಾಯಂ ನೌಕರ 2 ನಿಮಿಷದಲ್ಲಿ ಕೆಲಸದಿಂದ ತೆಗೆಸುವುದಾಗಿ ಕಛೇರಿಯಲ್ಲಿ ಕೂಗಾಡಿದ್ದ. ಆ ದಿನ ನನ್ನ ನಾನು ಮೇಜು ಕುಟ್ಟಿ ಮಾತಾಡಿದೆ ಆದರೆ ಕಛೇರಿಯ ಯಾವುದೇ ಸಿಬ್ಬಂದಿ ನೆರವಿಗೆ ಬರಲಿಲ್ಲ, ಸ್ವಾೃರ್ಥಿಗಳು, ಜಿಲ್ಲಾಧಿಕಾರಿಗಳ ಬಳಿ ಅಳುತ್ತ ಹೋಗಿದ್ದೆ. ಆದರೆ ನಾನು ಆಗಲು ಅವರಿಗೆ ವ್ಯಕ್ತಿಯ ಹೆಸರು ಹೇಳಲಿಲ್ಲ. ಇಲಾಖೆಯಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲ ಈ ಬಗ್ಗೆ ಗಮನ ಹರಿಸಿ ಎಂದು ಹೇಳಿ ಬಂದಿದ್ದೆ. ನನ್ನ ಮೇಲಾಧಿಕಾರಿ ಲಿಖಿತ ರೂಪದಲ್ಲಿ ಕೊಡು ಕ್ರಮ ಜರುಗಿಸುವೇ ಎಂದರು.

                    ಯಾವ ಅಧಿಕಾರಿ ಸಿಬ್ಬಂದಿ ತನ್ನ ಕಛೇರಿಗೆ ಸಿ.ಸಿ.ಕ್ಯಾಮೆರಾ ಕೂಡಿಸಿ ಎನ್ನುತ್ತಾನೆ. ನಾನು ಹೇಳಿದ್ದೆ ಎಲ್ಲ ಸೂಕ್ತ ಸಂದರ್ಭಗಳಲ್ಲಿ ಪುನರುಚ್ಚರಿಸಿದ್ದೆ ಆದರೆ ಇಲ್ಲಿಯವರೆಗೂ ಸಿ.ಸಿ.ಟಿ.ವಿ ಕ್ಯಾಮೆರಾ ಬರಲಿಲ್ಲ Mostly  ಅಧಿಕಾರಿಗೆ ಇತರರು ಸಿಕ್ಕಿಕೊಳ್ಳಬಹುದು ಎನ್ನುವ ಆತಂಕವಿರಬಹುದು.

            ನಾವು ಲೋಕಲ್, ನೀವೇನು ಮಾಡೋದಿಕ್ಕೆ ಆಗಲ್ಲ, ನೋಡಿದ್ರು ಕಣ್ಣು ಮುಚ್ಚಿಕೊಂಡು ಕೂರಬೇಕು ಇಲ್ಲ ಬಿಟ್ಟುಹೋಗಬೇಕು ಎನ್ನುವ ನುಡಿಗಳು ಕಿವಿಯಲ್ಲಿ  ನಾಟ್ಯವಾಡುತ್ತಿವೆ.
                    
                     ಯಾವ ಸಿಬ್ಬಂದಿಗಳ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಇರಲು ಬಿಟ್ಟೆನೋ ಅವರೇ ಎಲ್ಲರ ಮುಂದೆ ದೈಹಿಕ ದಾಳಿಯ ಹೆಚ್ಚರಿಕೆ ಕೊಟ್ಟದ್ದು ಸೋಜಿಗವೇ ಸರಿ. ಗುತ್ತಿಗೆ ಆಧಾರಿತ ಅಧಿಕಾರಿಯಾದ ನಾನು ಕೆಲಸದಿಂದ ತೆಗೆದು ಆಕುವಷ್ಟು ಅಧಿಕಾರವಿದೆಯೇ?

 ನಾನೊಬ್ಬ Non corruptive  ಇರಬೇಕು ಎಲ್ಲರು ದುಡ್ಡು ಮಾಡಬೇಕು. Recruitment ನಲ್ಲಿ selection  ನಲ್ಲಿ short list ಮಾಡಲು ನಾನು ಬೇಡ  ಆದರೆ ಸಹಿ ಮಾತ್ರ ಬೇಕು.

                     ಸರ್ಕಾರಿ ಕಛೇರಿಯಲ್ಲಿ ಪ್ರತಿಯೋರ್ವರಿಗು ಒಂದು ನಿರ್ದಿಷ್ಟ ಕೆಲಸಗಳಿರುತ್ತವೆ, ಅವರವರು ಅವರವರ ಕೆಲಸಗಳನ್ನು ಮಾಡಿದರೆ ಸಾಕು ''ಸರ್ಕಾರಿ ಕೆಲಸ ದೇವರ ಕೆಲಸ''ವಾಗಿ ಬಿಡುತ್ತದೆ.
                          
                    ಒಬ್ಬ ವೈದ್ಯನಾಗಿ ಸರ್ಕಾರಿ ಕೆಲಸಕ್ಕೆ ಸೇರಿದರೆ ಮುಗಿಯಿತು ಕೆಲಸವೇ ಇಲ್ಲ ಬರಿ ಹಣಕಾಸು ತರಬೇತಿ ನಿರ್ವಹಿಸಿದರೇ ಸಾಕು ಪೇಶಂಟ್ ನೋಡಲು ಗುತ್ತಿಗೆ ವೈದ್ಯರಿರುತ್ತಾರೆ ಬಿಟ್ರೆ ಖಾಸಗಿ ಆಸ್ಪತ್ರೆಗಳಿವೆ. ಆಸ್ಪತ್ರೆಗಳಲ್ಲಿ ಸ್ಟಾಫ್ ನರ್ಸ್ ಇದ್ರೆ ಖಾಸಗಿ ಆಸ್ಪತ್ರೆಗಳಿಗೆ Patient  ಕಡಿಮೆ ಆಗ್ತಾರೆ. ಒಂದಲ್ಲ ಒಂದು ನೆವ ಕೊಟ್ಟು ಸ್ಟಾಫ್ ನರ್ಸ್ ಇಲ್ಲದಂತೆ ಮಾಡಿದ್ರೆ ಆಸ್ಪತ್ರೆ ಬಂದ್ Patient ಖಾಸಗಿ ಪಾಲು.
                       
                         ಒಮ್ಮೆಯಂತು ಬೆಂಗಳೂರಿನಿಂದ ಬಂದಿದ್ದ ಒಬ್ಬ ನೋಡಲ್ ಅಧಿಕಾರಿ ಯಾವುದೋ ಜಾತಿ ಬೋಳಿಮಗನೆ ಎಂದರೆ , ಇನ್ನೊಬ್ಬ ಮಹಾನುಭಾವ ನೀನೇನು ಜಿ.ಎ ನ ಕಡತದಲ್ಲಿ ಏನು ಬರಿಬೇಡ. ಅವರೇನು beggars ಅಲ್ಲ ನಿಮ್ಮತ್ರ beg ಮಾಡಲ್ಲ ಎಂದು ಹೇಳಿದ್ದು ಇವರು ಪ್ರಗತಿ ಪರಿಶೀಲನೆಗೆ ಬರುತ್ತಾರೋ ಅಥವಾ ಅಧಿಕೃತವಾಗಿ ಕಾರ್ಯಕ್ರಮಕ್ಕಿಂತ ಸ್ವಂತಕ್ಕೆ ಹಣ ಬಳಸುವುದಕ್ಕೆ ಪ್ರೇರಿಪಿಸುತ್ತಾರ ಎನ್ನುವುದೇ ಒಂದು ಪ್ರಶ್ನೆ

               ಕಾರ್ಯಕ್ರಮ ಹಳಿಬಿಟ್ಟ ರೈಲಿನಂತಾಗತೊಡಗಿದೆ. ಕಾರ್ಯಕ್ರಮಕ್ಕಿಂತ ವೇತನವೇ ಹೆಚ್ಚು, ಎಲ್ಲರು ಮ್ಯಾನೆಜರ್ ಗಳೇ!  What will manager do? Get work done through others. When all are managers, who will do the work? Out of all managers there will be one manager who takes the reporting of all consultant and other managers and its me in the current designation.

                  ಹಣಕಾಸು ವಿಭಾಗದವರು ಮಾಡಬೇಕಾದ ಸಾಪ್ಟವೇರ್ ಕೆಲಸವನ್ನು ಸೂಪರ್ವೈಸರಿ ಸಿಬ್ಬಂದಿಗಳನ್ನು ಈ ಕೆಲಸಕ್ಕೆ ನಿಯೋಜಿಸಿದ ಮಹಾನುಭಾವರಿಗೆ ನಮಸ್ಕರಿಸಬೇಕು. ಆಗೇ ಈ ಕಛೇರಿಯಲ್ಲಿ ಹಣಕಾಸು ವಿಭಾಗದವರು ಮಾಡುವಾಗ ನಾನು ನಾನು ಎಂದು ದುಂಬಾಲು ಬೀಳುತ್ತಿದ್ದವರೆಲ್ಲ ನಮ್ಮೆಡೆ ಬಂದಾಕ್ಷಣ ಮಾಯವಾದರು, ಅಧಿಕಾರಿಗಳು ಈ ವಿಷಯವಾಗಿ ಸಹಕರಿಸದಿರುವುದು ಕಾರ್ಯಕ್ರಮ ಪರಿಶೀಲನೆ ಮಾಡದೇ ಕಛೇರಿಯಲ್ಲಿ ಕೂರುವುದೇ ಉತ್ತಮ ಎನಿಸಿರಬೇಕು!

ಕೊನೆಗೆ ಅನಿಸಿದ್ದು ನನ್ನನ್ನು ಹಾಗೂ ನನ್ನ ತರಹದವರು ಇಲಾಖೆಗೆ ಸೇರಬಾರದು. corrective ಆಗಿರಬೇಕು, ಪ್ರಾಮಾಣಿಕತೆಗೆ ಗೌರವ ಸಿಕ್ಕೆ ಸಿಗುತ್ತೆ ಇಲ್ಲಿ ಅಲ್ಲ ಅಂದ್ರೆ ಎಲ್ಲೋ ಒಂದು ಕಡೆ. Skill update ಮಾಡ್ಕೋಬೇಕು. ಸಭೆ ಸಮಾರಂಭಗಳು ಈ ಕಛೇರಿ ಮಾತ್ರ ನನ್ನ ಮಾತನಾಡುವ ಶಕ್ತಿಯ ಕೇಂದ್ರಗಳಲ್ಲ ಕಲಿಕೆಗೆ ಮಾತನಾಡಲು ಹಲವು ಆಯಾಮಗಳು ದೊರೆಯುತ್ತವೆ.

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva