Posts

Showing posts from December, 2025

ನಮ್ಮದೇ ಕನಸಿನ ಓಟದಲ್ಲಿ ಸೋಲೋದಕ್ಕಿಂತ

ಯಾವುದೋ ಫಂಕ್ಷನ್ ನಲ್ಲಿ ಯಾರೋ ಒಬ್ಬರು ನಿನ್ನ ಕೈಯಲ್ಲಿ ಕಾರ್ ತಗೊಳ್ಳೋಕೆ ಆಗೋದಿಲ್ಲ ಎಂದು ಹಂಗಿಸಿರುತ್ತಾರೆ. ಅವತ್ತೇ ಕಾರ್ ನಮ್ಮದಾಗಿಸಿಕೊಳ್ಳುವ ಹಠಕ್ಕೆ ಬೀಳ್ತಿವಿ.ಇಎಂಐ ನಲ್ಲಿ ಸಾಲ ಸೋಲ ಎಲ್ಲಾ ಸೇರಿ ಕಾರು ಮನೆ ಮುಂದೆ ನಿಲ್ಲುತ್ತೆ. ಅವತ್ತು ಹಂಗಿಸಿದವರ ವಿರುದ್ದ ಗೆದ್ದ ಖುಷಿ ಇರುತ್ತೆ. ಅವತ್ತು ಹಂಗಿಸಿದವರು ಮತ್ತೆಲ್ಲೋ ಸಿಕ್ಕಿದಾಗ ಏನೋ ಕಾರ್ ಗೀರ್ ತಗೊಂಡ್ ಜೋರಾಗಿದ್ಯಾ.. ಸ್ವೀಟ್ ಎಲ್ಲೋ? ಅಂತಾರೆ. ಆದರೆ ಒಮ್ಮೆ ಹಿಂದಿರುಗಿ ನೋಡಿದ್ರೆ ನಮಗೆ ಕಾರಿನ ಆಗತ್ಯವೇ ಇರೋದಿಲ್ಲ. ಹಾಗಂತ ಈಗ ಕಾರನ್ನು ಮಾರೋಕೂ ಆಗಲ್ಲ. ಆದ್ದರಿಂದ ಯಾವುದೇ ವಿಷಯದಲ್ಲಿ ಗೆಲ್ಲಲು ಹೊರಡುವ ಮುಂಚೆ "ಈ ಗೆಲುವು ನನಗೆಷ್ಟು ಅನಿವಾರ್ಯ"? ಅಂತ ಒಮ್ಮೆ ನೋಡಬೇಕು. ಯಾರದ್ದೋ ಮೇಲಿನ ಹಠಕ್ಕೆ ಗೆಲ್ಲೋದು "ನಮ್ಮದೇ ಕನಸಿನ ಓಟದಲ್ಲಿ ಸೋಲೋದಕ್ಕಿಂತ" ಅಪಾಯಕಾರಿ. - ಸದ್ಗುರು ಜಗ್ಗಿ ವಾಸುದೇವ್

ಸೃಷ್ಟಿ ಹೇಗಾಯಿತು...?

*ಸೃಷ್ಟಿ ಹೇಗಾಯಿತು...?* *ಸೃಷ್ಟಿಯ ಕಾಲ ಚಕ್ರ ಹೇಗೆ ನಡೆಯಿತು?.* 3. ಮಾನವನಲ್ಲಿ ಇರೋ ಸೃಷ್ಟಿಯ ತತ್ವಗಳು ಎಷ್ಟಿದೆ. 1. ಮೊದಲು ಪರಾತ್ಪರವು ಹುಟ್ಟಿ, ಇದರಿಂದ ಶಿವ ಹುಟ್ಟಿದ್ದು. 2. ಶಿವನಿಂದ ಶಕ್ತಿ. 3. ಶಕ್ತಿಯಿಂದ ನಾದ. 4. ನಾದದಿಂದ ಬಿಂದು. 5. ಬಿಂದುವಿನಿಂದ ಸದಾಶಿವಂ 6. ಸದಿಶಿವಂನಿಂದ ಮಹೇಶ್ವರ. 7. ಮಹೇಶ್ವರನಿಂದ ಈಶ್ವರಂ. 8. ಈಶ್ವರನಿಂದ ರುದ್ರ. 9. ರುದ್ರನಿಂದ ವಿಷ್ಣು. 10. ವಿಷ್ಣುವಿನಿಂದ ಬ್ರಹ್ಮ. 11. ಬ್ರಹ್ಮಾನಿಂದ ಆತ್ಮ. 12. ಆತ್ಮನಿಂದ ದಹರಾಕಾಶ. 13. ದಹರಾಕಾಶದಿಂದ ವಾಯು. 14. ವಾಯುವಿನಿಂದ ಅಗ್ನಿ. 15. ಅಗ್ನಿಯಿಂದ ಜಲ. 16. ಜಲದಿಂದ ಪೃಥ್ವಿಯಿಂದ ಓಷಧಗಳು. 17. ಓಷಧಗಳಿಂದ ಆಹಾರ. 18. ಇದರಿಂದಾಗಿ ನರ,ಮೃಗ, ಪಶು, ಪಕ್ಷಿ,ಸ್ಥಾವರ,ಜಂಗಮಗಳು ಹುಟ್ಟಿದವು. ಸೃಷ್ಟಿಯ ಕಾಲ ಚಕ್ರ. ಪರಾಶಕ್ತಿ ಆದಿಯಲ್ಲಿ ನಡೆದಿದೆ. ಇದುವರೆಗೂ 50 ಶಿವ, ವಿಷ್ಣು, ಬ್ರಹ್ಮರು ಬಂದಿದ್ದಾರೆ . ಈಗ 51ನೇ ಬಾರಿ ನಡೀತಾ ಇದೆ. 1. ಕೃತಯುಗ. 2. ತ್ರೇತಾಯುಗ. 3. ದ್ವಾಪರಯುಗ. 4. ಕಲಿಯುಗ. ನಾಲ್ಕು ಯುಗಕ್ಕೆ ಒಂದು ಮಹಾಯುಗ. 71ಮಹಾಯುಗಕ್ಕೆ ಒಂದು ಮನ್ವಂತರ. 14 ಮನ್ವಂತರ ಕ್ಕೆ ಒಂದು ಸೃಷ್ಟಿ, ಒಂದು ಕಲ್ಪ. 15 ಸಂಧಿಗೆ ಒಂದು ಪ್ರಳಯ, ಒಂದು ಕಲ್ಪ. 1000 ಯುಗ ಆದ್ರೆ ಬ್ರಹ್ಮನಿಗೆ ಒಂದು ಹಗಲು ಸೃಷ್ಟಿ. 1000 ಯುಗ ಆದ್ರೆ ಒಂದು ರಾತ್ರಿ ಪ್ರಳಯ. 2000 ಯುಗಕ್ಕೆ ಒಂದು ದಿನ. ಬ್ರಹ್ಮನ ವಯಸ್ಸು 51...

ನುಗ್ಗೆಕಾಯಿ (Moringa) ಕೃಷಿ

ನುಗ್ಗೆಕಾಯಿ (Moringa) ಕೃಷಿಯು ಅತೀ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತರುವಂತಹ ಒಂದು ಲಾಭದಾಯಕ ಬೆಳೆಯಾಗಿದೆ. ಇದನ್ನು "ಅದ್ಭುತ ಮರ" ಎಂದು ಕರೆಯಲಾಗುತ್ತದೆ ಏಕೆಂದರೆ ಇದರ ಸೊಪ್ಪು, ಕಾಯಿ ಮತ್ತು ಹೂವು ಎಲ್ಲವೂ ಮಾರಾಟಕ್ಕೆ ಯೋಗ್ಯವಾಗಿವೆ. ನುಗ್ಗೆ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ: 1. ಮಣ್ಣು ಮತ್ತು ಹವಾಮಾನ ಮಣ್ಣು: ನುಗ್ಗೆಯು ಎಲ್ಲಾ ಬಗೆಯ ಮಣ್ಣಿನಲ್ಲಿ ಬೆಳೆಯಬಲ್ಲದು. ಆದರೆ ನೀರು ಸರಾಗವಾಗಿ ಹರಿದು ಹೋಗುವ ಮರಳು ಮಿಶ್ರಿತ ಕೆಮ್ಮಣ್ಣು ಅತ್ಯಂತ ಸೂಕ್ತ. ಹವಾಮಾನ: ಉಷ್ಣವಲಯದ ಹವಾಮಾನ ಇದಕ್ಕೆ ಪೂರಕ. ಅತಿಯಾದ ಚಳಿ ಅಥವಾ ಹಿಮ ಇದರ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. 2. ಪ್ರಮುಖ ತಳಿಗಳು ಭಾಗ್ಯ (KDM-01): ಕರ್ನಾಟಕಕ್ಕೆ ಅತಿ ಹೆಚ್ಚು ಸೂಕ್ತವಾದ ತಳಿ. ಇದು ಬೇಗನೆ ಇಳುವರಿ ನೀಡುತ್ತದೆ ಮತ್ತು ಕಾಯಿಗಳು ರುಚಿಯಾಗಿರುತ್ತವೆ. PKM-1 ಮತ್ತು PKM-2: ವಾರ್ಷಿಕ ನುಗ್ಗೆ ತಳಿಗಳು, ಅತಿ ಹೆಚ್ಚು ಇಳುವರಿ ನೀಡುತ್ತವೆ. ಕೊಯಂಬತ್ತೂರು-2: ಇದು ಕೂಡ ಜನಪ್ರಿಯ ತಳಿಯಾಗಿದೆ. 3. ನಾಟಿ ಮಾಡುವ ವಿಧಾನ ಸಮಯ: ಜೂನ್‌ನಿಂದ ಆಗಸ್ಟ್ ತಿಂಗಳು (ಮಳೆಗಾಲದ ಆರಂಭ) ನಾಟಿ ಮಾಡಲು ಸೂಕ್ತ ಸಮಯ. ಅಂತರ: ಸಾಲಿನಿಂದ ಸಾಲಿಗೆ 10 ಅಡಿ ಮತ್ತು ಗಿಡದಿಂದ ಗಿಡಕ್ಕೆ 8 ಅಡಿ ಅಂತರವಿರಲಿ. ಗುಂಡಿ ತೆಗೆಯುವುದು: 1.5 x 1.5 ಅಡಿ ಅಳತೆಯ ಗುಂಡಿ ತೆಗೆದು, ಅದಕ್ಕೆ ಕೊಟ್ಟಿಗೆ ಗೊಬ್ಬರ ಮತ್ತು ಮೇಲ್ಪದರದ ಮಣ್ಣನ್ನು ಬೆರೆಸಿ ಗಿ...

ಶಾಂತಿಗಳು ಹಿಂದೂ ಧರ್ಮ

*ಶಾಂತಿಗಳು* ಪ್ರತ್ಯೇಕ ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ. ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡ ಬೇಕು? ಮಗುವಿನ ಜನನ ಕಾಲದಲ್ಲಿ ನಾನಾ ವಿಧ ದೋಷಾದಿಗಳು ಬರುತ್ತವೆ. ಇದನ್ನು ಗುರುಗಳ ಮುಖೇನ ತಿಳಿದು ಬಂದಿರುವ *ದೋಷ ನಿವಾರಣೆಗೆ* ಶಾಂತ್ಯಾದಿಗಳನ್ನು ಮಾಡಿಕೊಳ್ಳ ಬೇಕು. ೧. *ಕುಜ-ರಾಹು ಸಂಧಿ ಶಾಂತಿ*: ನವಗ್ರಹದಲ್ಲಿ ಒಂದೊಂದು ಗ್ರಹಕ್ಕೆ ಇಷ್ಟು ವರ್ಷಗಳು ಮನುಷ್ಯನ ಜೀವನದಲ್ಲಿ ಅಧಿಪತ್ಯ (ಅಧಿಕಾರ) ಎಂದಿರುತ್ತದೆ. ಆದರೆ ಪರಸ್ಪರ ಶತ್ರು ಗ್ರಹಗಳ ಅಧಿಕಾರ ಅವಧಿ ಮುಗಿದು ಇನ್ನೊಂದು ಶತ್ರು ಗ್ರಹದ ಅಧಿಕಾರ ಆರಂಭ ಕಾಲದಲ್ಲಿ ೬ ತಿಂಗಳು ಮುಂಚಿತವಾಗಿ ಸಂಧಿ ಶಾಂತಿ ಮಾಡಿಸುತ್ತಾರೆ. ಇಲ್ಲಿ ಕುಜ ದಶಾ ೭ ವರ್ಷಗಳು ಮುಗಿದು ರಾಹು ದಶಾ ೧೮ ವರ್ಷಗಳು ಆರಂಭವಾಗುವ ಸಮಯಕ್ಕೆ ಈ ಶಾಂತಿಯನ್ನು ಮಾಡಿಸ ಬೇಕು. ಈ ಸಂಧಿ ಕಾಲದ ವಿಶೇಷವಾಗಿ ಗಂಡಸರಿಗೆ ಹೆಚ್ಚು ಹಾನಿಕಾರಕ ಆಗಿರುತ್ತದೆ. ಆಯುಷ್ಯದಲ್ಲಿ ಒಂದು ಕಂಟಕ ಎನ್ನಬಹುದು. ೨. *ರಾಹು- ಬೃಹಸ್ಪತಿ ಸಂಧಿ ಶಾಂತಿ*: ರಾಹುವಿನ ಅಧಿಕಾರ ಅವಧಿ ೧೮ ವರ್ಷಗಳು ಕಳೆದು ಗುರುವಿನ ೧೬ ವರ್ಷದ ಅಧಿಕಾರದ ಅವಧಿ ಆರಂಭವಾಗುವ ೬ ತಿಂಗಳು ಮೊದಲು ಈ ಶಾಂತಿಯನ್ನು ಅಗತ್ಯವಾಗಿ ಮಾಡಿಸಿ ಕೊಳ್ಳ ಬೇಕು. ಈ ಸಂಧಿಕಾಲವು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಹಾನಿಕಾರಕ ಆಗಿರುತ್ತದೆ. ೩. *ಶುಕ್ರಾದಿತ್ಯ ಸಂಧಿ ಶಾಂತಿ*: ಶುಕ್ರ ಅಧಿಕಾರ ಅವಧಿ ೨೦ ವರ್ಷಗಳು ಕಳೆದು ಸೂರ್ಯನ ೬ ವರ್ಷದ ಅಧಿಕಾರ...

Year-End Health Check: Are You Skipping the Most Important Test?

As the year comes to an end, most of us focus on finishing pending work, planning holidays or setting new goals. But this is also the perfect time to pause and understand how your body has been doing, with a year-end health check as a way to spot hidden changes that daily life may have covered up. Why do year-end checks matter? Throughout the year, your habits change. Stress might have gone up, sleep cycle would have gotten disturbed, eating patterns would have shifted, and energy levels would have risen or dropped. A set of medical tests gives you a clear picture of how your body has handled everything. It also helps you set health goals for the coming year with more clarity. The one commonly ignored test: Vitamin D Most people focus on sugar, cholesterol and liver tests. While these are important, many ignore vitamin D, one of the most common deficiencies in India. Low vitamin D levels affect bones, immunity, sleep quality, and even mood. The symptoms are so subtle that they of...

2025 Shabarimala Yatra

Every journey is different from previous journey. This year mod of travel was through a minibus. location Peenya 2nd stage Ganapati temple. This year journey was memorable, as bus went leaving behind me in a beach by mistake. My cousin and another co traveller came back in an auto to pick up. We first moved directly towards Shabarimala than visiting any other temple like previous years. It was a 4 day yatra. Total 24 people travelled including two chefs. At Nilakkal bus stop, yatra mini bus was stopped in location number 22. From Nilakkal to Pampa travelled in a AC bus. Took bath in holy river Pampa.Then moved for Aadhaar verification near Ganapati temple. Every step towards Ayyappa was a great step towards salvation. So many devotees, small kids, specially challenged, aged devotees all climbing the hill and returning from visiting the temple. Ayyappa bhajans, Ayyappa name sounding in every ones heart. Special ayurvedic hot drinking water, free biscuits, medical checkpost, facilities ...

2025ನೇ ವರ್ಷ

2025ನೇ ವರ್ಷ ನನ್ನನ್ನು ವೈಯಕ್ತಿಕವಾಗಿಯೂ, ಸಾರ್ವಜನಿಕವಾಗಿಯೂ ನಾನು ಊಹಿಸಿರದ ರೀತಿಯಲ್ಲಿ ತೀವ್ರವಾಗಿ ಪರೀಕ್ಷಿಸಿತು. ಮುನ್ನಡೆಗಳನ್ನೂ ಕಂಡೆ, ಹಿನ್ನಡೆಗಳನ್ನೂ ಅನುಭವಿಸಿದೆ. ಗೆಲುವಿನ ಉಲ್ಲಾಸವನ್ನೂ, ಸೋಲಿನ ನೋವನ್ನೂ ಕಂಡಿದ್ದೇನೆ. ನಂಬಿಕೆಯ ಶಕ್ತಿಯನ್ನೂ, ಹೃದಯವಿದ್ರಾವಕ ಕ್ಷಣಗಳನ್ನೂ ಎದುರಿಸಿದ್ದೇನೆ. ಈ ಪಯಣದಲ್ಲಿ ನಾನು ಒಂದು ಮಹತ್ವದ ಪಾಠ ಕಲಿತೆ — ನಾಯಕತ್ವ ಎಂದರೆ ಸುಲಭದ ಮಾರ್ಗವಲ್ಲ. ವಿಶೇಷವಾಗಿ ಸೌಕರ್ಯಕ್ಕಿಂತ ಧೈರ್ಯವನ್ನು ಆರಿಸಿಕೊಂಡ ಯುವತಿಯಾಗಿ ಆ ಹೊರೆ ಇನ್ನಷ್ಟು ಭಾರವಾಗಿತ್ತು. ಅನುಮಾನಗಳ ಕ್ಷಣಗಳು ಬಂದವು. ಒಂಟಿತನ ಕಾಡಿದ ದಿನಗಳಿದ್ದವು. ಹೊಣೆಗಾರಿಕೆಯ ತೂಕ ಉಸಿರುಗಟ್ಟಿಸಿದ ಸಂದರ್ಭಗಳೂ ಇದ್ದವು. ಆದರೆ ಅದೇ ಸಮಯದಲ್ಲಿ ನನ್ನೊಳಗೆ ಬೆಳೆದಿದ್ದು ಸಹನಶೀಲತೆ, ಉದ್ದೇಶಭಾವ, ಮತ್ತು ನಾನು ಏಕೆ ಈ ಪಯಣ ಆರಂಭಿಸಿದೆ ಎಂಬುದರ ಮೇಲಿನ ಅಚಲ ನಂಬಿಕೆ. ಈ ವರ್ಷ ನನಗೆ ಸಿಕ್ಕ ಪ್ರತಿಯೊಂದು ಅನುಭವವೂ ನನಗೆ ಒಂದು ಸತ್ಯವನ್ನು ನೆನಪಿಸುತ್ತದೆ — 👉 ನಾನು ನನ್ನ ನೆಲೆಯಲ್ಲಿ ನಿಂತಿದ್ದೇನೆ 👉 ನನ್ನ ಸತ್ಯವನ್ನು ಧೈರ್ಯವಾಗಿ ಹೇಳಿದ್ದೇನೆ 👉 ಕುಗ್ಗಲು ನಿರಾಕರಿಸಿದ್ದೇನೆ ಇಂದಿಗೂ ನಾನು ಆಶಾವಾದಿಯಾಗಿದ್ದೇನೆ, ಏಕೆಂದರೆ ಬದಲಾವಣೆ ಎಂದಿಗೂ ಸುಲಭದಿಂದ ಹುಟ್ಟುವುದಿಲ್ಲ — ಅದು ಧೈರ್ಯದಿಂದಲೇ ರೂಪುಗೊಳ್ಳುತ್ತದೆ. ಬರುವ ವರ್ಷಕ್ಕೆ ನಾನು ಇನ್ನಷ್ಟು ಬಲಶಾಲಿಯಾಗಿ, ಬುದ್ಧಿವಂತಿಯಾಗಿ, ಮತ್ತು ದೃಢನಿಶ್ಚಯದಿಂದ ಹೆಜ್ಜೆ ಇಡ...