ಕೋವಿಡ್-೧೯ ಸಂದರ್ಭದಲ್ಲಿ ಲಾಕ್ ಡೌನ್ ಸಾಮನ್ಯವಾದ ಸರ್ಕಾರದ ನಡೆಯಾಗಿದೆ. ಲಾಕ್ ಡೌನ್ ಪೂರ್ಣತಃ, ಭಾಗಶಃ ಲಾಕ್ ಡೌನ್ ಅನ್ನು ಕಾಣಬಹುದಾಗಿದೆ. ಲಾಕ್ ಡೌನ್ ನಿಂದ ಸಮುದಾಯದಲ್ಲಿ ಬಹುಸಂಖ್ಯೆಯಲ್ಲಿ ಜನರಿಗೆ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಇರುವ ಮಾರ್ಗೋಪಾಯವಾಗಿದೆ. ಕೋವಿಡ್ -೧೯ ನಿಂದ ಗ್ರಾಮ, ಜಿಲ್ಲೆ, ರಾಜ್ಯ, ದೇಶ, ವಿದೇಶ, ಪ್ರಪಂಚ ಎಲ್ಲೆಡೆಯು ತನ್ನ ಕಬಂಧ ಬಾಹುಗಳನ್ನು ಆವರಿಸಿ ಆರ್ಥಿಕ ಅಸಮತೋಲನಕ್ಕೆ ಕಾರಣವಾಗಿದೆ. ಔಷಧಿಯ, ವೈದ್ಯಕೀಯ ವಲಯ ಹಾಗೂ ವೈದ್ಯಕೀಯ ಅವಲಂಭಿತ ಉದ್ಯಮಗಳಿಗೆ ಲಾಭದಾಯಕವಾಗಿದೆ. ಆದರೆ ಲಾಕ್ ಡೌನ್ ನಿಂದ ಜನ ಸಮುದಾಯಕ್ಕೆ ಉದ್ಯಮಗಳಿಗೆ, ವ್ಯವಹಾರಕ್ಕೆ ತೊಂದರೆಯಾಗಿದೆ. ನಗರ ಪ್ರದೇಶದಲ್ಲಿ ಅದೇ ದಿನ ದುಡಿದು ಜೀವಿಸುವ ಕಾರ್ಮಿಕ ವರ್ಗಕ್ಕೆ ತೊಂದರೆಯಾಗಿದೆ. ಕಾರ್ಮಿಕ ವಲಯದಲ್ಲಿ ಶ್ರೀಮಂತರಿದ್ದಾರೆ, ಬಡವರಿದ್ದಾರೆ. ಕಡು ಬಡವರ ಬಳಿ ವಾಹನಗಳು ಲಭ್ಯವಿರುವುದಿಲ್ಲ, ಮೆಟ್ರೋ, ಕಛೇರಿ, ಸಂಸ್ಥೆ ವಾಹನ, ಬಿ.ಎಂ.ಟಿಸಿ ರೀತಿ ಸರ್ಕಾರಿ ಬಸ್ ವ್ಯವಸ್ಥೆಯನ್ನು ಅವಲಂಭಿಸಿರುತ್ತಾರೆ. ಹಣದ ಅಡಚಣೆಯಿರುತ್ತದೆ. ಒಂದು ತಿಂಗಳ ಬಸ್ ಪಾಸ್ ಅಥವಾ ಮೆಟ್ರೋದಲ್ಲಿ ಸಂಚರಿಸುವ ಮೊತ್ತವನ್ನು ಈ ದಿನ ಒಂದು ದಿನ, ಒಂದು ವಾರದಲ್ಲಿ ಕೆಲಸದ ಸ್ಥಳಕ್ಕೆ ತೆರಳಲು ಸಂದಾಯಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆಟೋಗಳಿಗೆ...