ಹಾಯ್‌ ಬೆಂಗಳೂರು, ಓ- ಮನಸೇ, ರವಿ ಬೆಳಗೆರೆ - Words Magician

 ಹಾಯ್‌ ಬೆಂಗಳೂರು, ಓ- ಮನಸೇ, ರವಿ ಬೆಳಗೆರೆ –

ಪದ್ಮನಾಭನಗರ ಕಛೇರಿಯಲ್ಲಿ ತಡರಾತ್ರಿ ಹೃದಯಾಘಾತದಿಂದ ದಿನಾಂಕ 12/11/2020 ರಂದು 12.15 ಕ್ಕೆ ಮರಣ. 1995 ರಲ್ಲಿ ಹಾಯ್‌ ವೆಂಗಳೂರು ಪ್ರಾರಂಭ, ಸುಮಾರು 50 ಕ್ಕೂ ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕೃತರು. ಬನಶಂಕರಿ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ. ಪ್ರಾರ್ಥನಾ ಶಾಲೆಯ ಸ್ಥಾಪಕ ರವಿ ಬೆಳಗೆರೆ,
ಹಾವೇರಿ ಜಿಲ್ಲೆಯಲ್ಲಿ ಇಂದು ದಿನಾಂಕ 13/11/2020 ಮೆಡಿಕಲ್‌ ಕಾಲೇಜು ಉದ್ಘಾಟನೆಯಾದ ದಿನ.

ರವಿ ಬೆಳಗೆರೆ, ಹೆಸರಿಗೆ ತಕ್ಕಂತೆ ಪತ್ರಿಕೋದ್ಯಮ ರಂಗದಲ್ಲಿ ಪ್ರಜ್ವಲಿಸಿ, ಪತ್ರಿಕೋದ್ಯಮವನ್ನಾಳಿದ ಧೃವತಾರೆ. ರವಿ ಬೆಳಗೆರೆ ಒಂದು ಆದಮ್ಯ ಚೇತನ. ಪತ್ರಿಕಾ ಲೋಕದ ತನಿಖಾ ಪತ್ರಿಕೋದ್ಯಮಕ್ಕೆ ಒಂದು ಹೊಸತನವನ್ನು ನೀಡಿದ ರವಿ ಬೆಳಗೆರೆ , ಓ ಮನಸೇ ಎಂದು ನಮ್ಮನ್ನು ಕಾಡಿದ ರವಿ ಬೆಳಗೆರೆ ಇಂದು ನಮ್ಮೊಡನಿಲ್ಲ. ತುಂಬಾ ಬೇಜಾರು ಕಂಡ್ರಿ, ಏನನ್ನು ಕಳೆದುಕೊಂಡಂತೆ, ಯಾರೋ ಸಂಬಂಧಿಯನ್ನು ಕಳೆದುಕೊಂಡಂತೆ.

ಹಾಯ್‌ ಬೆಂಗಳೂರು ಎಂಬ ಪತ್ರಿಕೆಯ ಮೂಲಕ ರವಿ ಬೆಳಗೆರೆ ಎಂಬ ಪತ್ರಕರ್ತರನ್ನು ಹಚ್ಚಿಕೊಂಡು ಅವರ ಅಭಿಮಾನಿಯಾಗಿ ಗೌರವಿಸಿದ್ದು ಒಂದು ಒಳ್ಳೆಯ ನಡೆ. ಪತ್ರಿಕಾ ರಂಗದಲ್ಲಿ ತನ್ನದೇ ಒಂದು ಓದುಗ ವೃಂದವನ್ನು ಹೊಂದಿದ್ದ ಬಹು ಬೇಡಿಕೆಯ ಲೇಖಕ, ರವಿ ಬೆಳಗೆರೆ.

ರವಿ ಬೆಳಗೆರೆ ಬರೆಯಲು ಕುಳಿತರೆ ೬-೭ ಗಂಟೆ ಬರೆಯುವುದನ್ನು ಮುಗಿಸದೇ ಎದ್ದೇಳುತ್ತಿರಲಿಲ್ಲ, ಅಮ್ಮ ಸಿಕ್ಕಿದ್ಲು ಒಂದು ರಾತ್ರಿಯಲ್ಲಿ ಬರೆದ ಪುಸ್ತಕ!. ರವಿ ಬೆಳಗೆರೆ ಬದುಕೇ ಬೆರಗು. ಸಮಾಜ ಸುಧಾರಣೆಗೆ ಪ್ರಯತ್ನ ಮಾಡಿದರು, ಯುವಕರಿಗೆ ದಾರಿ ದೀಪವಾಗಿದ್ದವರು.

ಪ್ರಾರ್ಥನಾ ಶಾಲೆಯನ್ನು ಪ್ರಾರಂಭಿಸಿ ನಿಜ ಅರ್ಥದಲ್ಲಿ ಜಾತಿ ರಹಿತ, ದೇಣಿಗೆ ರಹಿತ ಶಾಲೆಯನ್ನು ಪ್ರಾರಂಭಿಸಿ ಜಾತ್ಯಾತೀತ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ತಲುಪಿಸುವ ವ್ಯವಸ್ಥೆ ಕಲ್ಪಿಸಿದ್ದು ಉತ್ತಮವಾದುದಾಗಿದೆ.

ಕನಸು ಏಕಾಂತದಲ್ಲಿ ಹುಟ್ಟಬೇಕು.

ಜಂಗುಳಿಯಲ್ಲಿ ಬೆಳೆಯಬೇಕು ಬರವಣಿಗೆ

ಪ್ರಿಯ ವೀಕ್ಷಕರೇ,

ಪದಗಳ ಮೂಲಕವೇ ಭ್ರಷ್ಟರ ಬೆವರಿಳಿಸುತ್ತಿದ್ದ ಪತ್ರಿಕೋದ್ಯಮದ ರವಿ.

ಸದಾ ಬರವಣಿಗೆ, ಬರವಣಿಗೆಗೆ ಕತ್ತಲು,ಬೆಳಕಿನ ಹಂಗಿಲ್ಲ ಆಲೋಚನೆ, ಕಲ್ಪನೆ, ಕನಸು.

ಗಾಡ್ ಫಾದರ್‌, ಬಿಗ್‌ಬಾಸ್‌, ಇಂದಿರೆಯ ಮಗ ಸಂಜಯ, ಬ್ಲ್ಯಾಕ್‌ ಪ್ರೈಡೇ, ಆತ್ಮ.

ಒಬ್ಬ ಉತ್ತಮ ಸಲಹೆಗಾರ,

ಇದು ಜೀವನ, ಇದುವೇ ಜೀವನ.

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva