Sri Jagadguru 1008 Ujjaini Shrigalu @ Abbe tumkur fair - veerashaiva

ಅಬ್ಬೆತುಮಕೂರು ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನಲ್ಲಿದೆ. ಇಲ್ಲಿ ಶ್ರೀ ಗುರು ವಿಶ್ವಾರಾಧ್ಯರ ಮಠವಿದೆ. ಇಲ್ಲಿ ವೀರಶೈವ ಆಚರಣೆಯಿದ್ದು ಎಲ್ಲಾ ಮತ ಧರ್ಮದವರಿಗೂ ಸೇವೆಗೆ ಅವಕಾಶವಿದೆ.

6.3.14 ರಂದು ಅಬ್ಬೆ ತುಮುಕೂರಿನ ಶ್ರೀ ವಿಶ್ವಾರಾಧ್ಯರ ಮಠದಲ್ಲಿ ಜಾತ್ರೆ ನಡೆಯಿತು. ಜಾತ್ರೆಯ ನಿಮಿತ್ತ ವಿಶ್ವ ಶ್ರೀ ಪ್ರಶಸ್ತಿಯನ್ನು ನಾಡಿನ ಖ್ಯಾತ ನ್ಯಾಯಾಂಗ ವ್ಯವಸ್ಥೆಯ ಹಿರಿಯ ಜೀವಕ್ಕೆ ಮನ್ನಣೆ ನೀಡಿದರು. ಜಾತ್ರೆಯಲ್ಲಿ ಯಾದಗಿರಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ರನ್ನೊಳಗೊಂಡು ವಿವಿಧ ಮಠಾದೀಶ್ವರರು, ಮಹಾರಾಷ್ಟ್ರ ಸರಕಾರದ ಮಾಜ ಸಚಿವರಾದ ಮೈತ್ರಿಯವರನ್ನೊಳಗೊಂಡು, ಜನ ಸಾಮಾನ್ಯರು ಭಕ್ತರಾಗಿ ಜಾತ್ರೆಯಲ್ಲಿ ಭಾಗವಹಿಸಿದ್ದರು.

ಜಾತ್ರೆಯ ಮತ್ತೊಂದು ಆಕರ್ಷಣೆ ಎಂದರೆ ವೀರಶೈವ ಪಂಚ ಪೀಠಗಳಲ್ಲೊಂದಾದ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳವರು. ಎಂದಿನಂತೆ ಶ್ರೀ ಗುರುಗಳ ಭಾಷಣ ಕೊನೆಯಲ್ಲಿ ಶುರುವಾಯಿತು.

ಭಾಷಣದಲ್ಲಿ ಗುರುಗಳು ಆಡು ಮುಟ್ಟದ ಗಿಡ ಇಲ್ಲ ಎಂಬಂತೆ ತಮ್ಮ ವಾಕ್ ಶಕ್ತಿಯಿಂದ ಸಮಾಜದ ನಾನಾ ಮುಖಗಳ ಪರಿಚಯ ಮಾಡಿಸಿದರು.

ಮನೆಯಲ್ಲಿ ದೊಡ್ಡ ಮಗನಾಗಿ ಹುಟ್ಟಬಾರದು.
ಮದುವೆ ಮನೆಯಲ್ಲಿ ಊಟಕ್ಕೆ ಕೊನೆಯವನಾಗಿ ಹೋಗಬಾರದು.
ಸಭೆಯಲ್ಲಿ ಕೊನೆಯದಾಗಿ ಭಾಷಣ ಮಾಡಬಾರದು.

ನನಗೆ ಇಷ್ಟವಾದುದು ಗುರುಗಳು ಜೋಳದ ಬಗೆಗಳ ಬಗ್ಗೆ ನೀಡಿದ ಮಾಹಿತಿ

ಜೋಳದಲ್ಲಿ ನಾಲ್ಕು ವಿಧ:
1. ನುಸಿ ಜೋಳ: ನುಸಿಯ ಆಗೆ ಕೆಲ ಜನರು ನುಸುಳಿ ಎಲ್ಲವನ್ನು ತಿಂದು ನಾಶ ಮಾಡಿರುತ್ತಾರೆ. ನುಸುಳಿದ್ದು ಗೊತ್ತು ಆಗಿರುವುದಿಲ್ಲ.
2. ಅಗೇವು ಜೋಳ : ಕೆಲವು ಜನ ತಾವು ಬೆಳೆದ ಬೆಳೆಯನ್ನು ಅಗೇವಿನಲ್ಲಿ ಬೆಳೆಯನ್ನು ಸಂರಕ್ಷಿಸುತ್ತಾರೆ. ಅದು ಅವರಿಗೂ ಕೆಲವೊಮ್ಮೆ ದಕ್ಕುವುದಿಲ್ಲ.
3. ತಿನ್ನುವ ಜೋಳ:ಕೆಲವು ಜನ ತಿನ್ನುವುದಕ್ಕೆ ಇರುತ್ತಾರೆ. ಅವರು ಸಮಾಜದ ಅಸಮತೋಲನಕ್ಕೆ ಕಾರಣರಾಗುತ್ತಾರೆ.
4. ಬಿತ್ತುವ ಜೋಳ: ಜಗತ್ತಿನಲ್ಲಿ ವಿಜ್ಞಾನಿಗಳು ಕ್ಲೋನಿಂಗ್ ತಂತ್ರಜ್ಞಾನದಿಂದ ಎಲ್ಲದರ ತದ್ರೂಪಿ ಸೃಷ್ಟಿ ಮಾಡುತ್ತಿದ್ದಾರೆ. ಆದರೆ ಒಂದು ಬೀಜವನ್ನು ಬಿತ್ತಿದಾಗ ನೂರು ಜೋಳವನ್ನು ನೀಡುವ ಭೂಮಿಯನ್ನು ಯಾರಾದರೂ ಸೃಷ್ಟಸಲು, ಸಾಧ್ಯವೇ, ಮನುಷ್ಯ 100 ಜೋಳ ನೀಡುವುದು ಬೇಡ ಆದರೆ 1ಜೋಳವನ್ನು ತೆಗೆದುಕೊಂಡು ಒಳ್ಳಯದೆಂಬ ಜೋಳವನ್ನು ನೀಡಿದರೆ ಸಾಕು ಎಂದು ತಿಳಿಸಿದರು.

ಚುನಾವಣೆಯ ಬಗ್ಗೆ ಮಾತನಾಡುತ್ತ ಶ್ರೀಗಳು : ಗಂಟೆ, ಪೂಜೆ ನಿಷೇಧಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ, ಕಾಯ್ದೆ ಕಾನೂನುಗಳನ್ನು ಜಾರಿಗೆ ತರಲು ಅಣಿಯಾಗುತ್ತದೆ. ಆದರೆ ಸರ್ವರು ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂಬ ಕಾಯ್ದೆಯನ್ನು ಜಾರಿಗೆ ತರಲು ಮಾತ್ರ ಯಾಕೆ ಯೋಚಿಸುತ್ತಿದೆ ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಮಠಾದೀಶರಾಗಿ ಎಲ್ಲಾ ಸ್ವಾಮಿಗಳು ಮೊದಲ್ಗೊಂಡು ಮತದಾನ ಮಾಡಬೇಕು ಎಂದು ಜನರಿಗೆ ಆದೇಶಿಸಿದರು.

ಮೊಬೈಲ್ ಪೋನ್ಗಳ ಬಗ್ಗೆ ಮಾತಾಡುತ್ತ ಜನರ Individuality and Privacy ಯ ಕಾರಣ satellite connection ದೇಶದಲ್ಲಿ ಜಾರಿಗೆ ಬಂದಿಲ್ಲ ಎಂದು ತಿಳಿಸಿದರು.

ಏಪ್ರಿಲ್ ನಲ್ಲಿ ಉಜ್ಜಯನಿ ಪೀಠದಲ್ಲಿ ವಿಶೇಷವಿದ್ದು ಆಗಮಿಸಲು ಕರೆ ನೀಡಿದರು.

                              ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ.

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ